Thank You

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. .

Dropdown Menu

Aug 5, 2020

ನುಡಿಮುತ್ತುಗಳು

"ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ನೀಡುತ್ತದೆ."

"ನಿಮ್ಮ ಗುರಿಯನ್ನು ಕೇಳಿ ಜನ ನಿನ್ನನ್ನು ಒಮ್ಮೆ ಹುಚ್ಚ ಎನ್ನಬೇಕು. 
  ನೀನು ಸಾಧಿಸಿದ ಮೇಲೆ ಅವರು ಹುಚ್ಚರಾಗಬೇಕು."

"ನಿದ್ದೆಯಲ್ಲಿ ಕಾಣುವಂತಹುದು ಕನಸಲ್ಲ,
  ನಿದ್ದೆ ಗೆಡುವಂತೆ ಮಾಡುವುದೇ ನಿಜವಾದ ಕನಸು."

"ಧೈರ್ಯದಿಂದ ಎದುರಿಸುವ ಮನಸ್ಸು ಬಂದಾಗಲೇ ನೀವು ಅರ್ಧ ಗೆದ್ದಂತೆ"

"ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ,
  ಕುಡಿದವನು ಘರ್ಜಿಸಲೇಬೇಕು."

"ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ,
  ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ."

"ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ,
  ಬಡವನಾಗಿ ಸಾಯುವುದು ನಿನ್ನ ತಪ್ಪು."

"ಕೊಂಬೆ ಮೇಲೆ ಕುಳಿತ ಹಕ್ಕಿ ನಂಬಿರುವುದು ಬಲವಾದ ಕೊಂಬೆಯನ್ನಲ್ಲ,
  ತನ್ನ ಪುಟ್ಟ ರೆಕ್ಕೆಯನ್ನು!!"

"ಕಲ್ಲು ಉಳಿಯ ಏಟು ತಿನ್ನದಿದ್ದರೆ ಅದು ಬರೆ ಕಲ್ಲು,
  ಅದು ಉಳಿಯ ಏಟು ತಿಂದರೆ ಅದೊಂದು ಮೂರ್ತಿ."

"ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
  ಏಕೆಂದರೆ ಯಾರಿಗೆ ಗೊತ್ತು
  ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು."

"ಸುಲಭವಾಗಿ ಪಡೆದದ್ದು ಬೇಗ ಕಳೆದುಕೊಳ್ಳುತ್ತೇವೆ.
  ಆದರೆ ಶ್ರಮದಿಂದ ನಿಧಾನವಾಗಿ ಪಡೆದಿದ್ದು ದೀರ್ಘಕಾಲ ಉಳಿಯುತ್ತದೆ."

"ಯಾವುದೇ ಕೆಲಸವನ್ನು ಶ್ರದ್ದೆಯಿಂಂದ ಮಾಡು,
  ಫಲದ ಬಗ್ಗೆ ಚಿಂತಿಸಬೇಡ, ಫಲ ಬಂದೇ ಬರುತ್ತದೆ."

______________________________________________________________________

ನುಡಿಮುತ್ತುಗಳು - ಪರಿಸರ

ಸಸಿ ಮರವನ್ನು ಕೇಳಿತು
"ಅಮ್ಮಾ ನಿನ್ನನ್ನು ಕಡಿದು ಏನು ಮಾಡುತ್ತಾರೆ ?"
ಅಮ್ಮ ಹೇಳಿದ್ದು
"ನನ್ನಿಂದ ಕಾಗದ ತಯಾರು ಮಾಡಿ ಅದರ ಮೇಲೆ  ಮರ ಬೆಳೆಸಿ ಕಾಡು ಉಳಿಸಿ ಎಂದು ಬರೆಯುತ್ತಾರೆ."


ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

SAVE THE TREES, THAT SAVE US

“ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.”

“ನನ್ನ ಸುತ್ತಮುತ್ತ ನಡೆಯುವ ನೂರಾರು ಪರಿಸರದ ವಿದ್ಯಮಾನಗಳನ್ನು ಅದರಲ್ಲಿ ಪಾತ್ರಧಾರಿಯಾಗದೆ ಪ್ರೇಕ್ಷಕನಾಗಿ ದೂರ ನಿಂತು ನೋಡಬೇಕೆಂಬುದೆ ನನ್ನ ಉದ್ದೇಶ.”

“ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕಾಡು ಬೆಳೆಸಿ, ನಾಡು ಉಳಿಸಿ

ಮನೆಗೊಂದು ಮರ, ಊರಿಗೊಂದು ವನ

ಮರ ಬೆಳೆಸಿ, ಬರ ಅಳಿಸಿ, ತಾಪ ಇಳಿಸಿ.

ನಿಮ್ಮ ವಂಶ ಬೆಳಗಲು ಮಗನನ್ನು ಬೆಳೆಸಿ ; 

ಮಗನ ವಂಶ ಬೆಳಗಲು ಮರಗಳನ್ನು ಬೆಳೆಸಿ.

ಕಾಡಿಲ್ಲದೇ ಮಳೆ ಇಲ್ಲಾ    

ಮಳೆ ಇಲ್ಲದೇ ಬೆಳೆ ಇಲ್ಲಾ




No comments:

Post a Comment